Skip to main content

Posts

Showing posts from 2011

ಜನುಮದಿನ ಗೀತೆ

ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು. ಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂ ತನೋತು ತೇ ಸರ್ವದಾ ಮುದಂ ಪ್ರಾರ್ಥಯಾಮಹೇ ಭವ ಶತಾಯುಷೀ ಈಶ್ವರಸ್ಸದಾ ತ್ವಾಂ ರಕ್ಷತು ಪುಣ್ಯಕರ್ಮಣಾ ಕೀರ್ತಿಮರ್ಜಯ ಜೀವನಂ ತವ ಭವತು ಸಾರ್ಥಕಂ

ಚಂದ್ರಮೌಳೇಶ್ವರ ದೇಗುಲ, ಅರಸೀಕೆರೆ

ಹಾಸನದ ಅರಸಿಕೆರೆಯಲ್ಲಿ ಹೊಯ್ಸಳ ಕಾಲದ ಸುಂದರ ಚಂದ್ರಮೌಳೇಶ್ವರ ದೇಗುಲವಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ದೇಗುಲಕ್ಕೆ ತಲುಪಲು ಅರಸಿಕೆರೆಯ ಮುಖ್ಯರಸ್ತೆಯಾದ ಬೆಂಗಳೂರು- ಹೊನ್ನಾವರ ರಾಜ್ಯಹೆದ್ದಾರಿಯಲ್ಲಿ ಅರಸೀಕೆರೆ ತಲುಪಿದೊಡನೆ ಬಲಕ್ಕೆ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಗೆ ತಿರುಗಿಕ್ಕೊಂಡು ಅರ್ಧ ಕಿಮೀ ಸಾಗಬೇಕು. ಸುಂದರ ಕಪ್ಪುಶಿಲೆಯ ಹೊಯ್ಸಳ ಕಾಲದ ಶಿಲ್ಪಕಲೆ ಮತ್ತು ನಕ್ಷತ್ರಾಕಾರದ ದೇವಾಲಯ ನಿಮ್ಮ ಕಣ್ಸೂರೆ ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇಗುಲವು ಬೇಳೂರು ಹಳೇಬೀಡು ದೇಗುಲಗಳಷ್ಟು ಗಾತ್ರದಲ್ಲಿ ದೊಡ್ದದಿಲ್ಲವಾದರೂ ಸೌಂದರ್ಯದಲ್ಲಿ ಸರಿಸಮಾನವಾಗಿದೆ. ಒಮ್ಮೆ ಹೋಗಿ ನೋಡಿಯೇ ತಿಳಿಯಿರಿ. ಸಾವಿರಕ್ಕಿಂತ ಹೆಚ್ಚು ವರ್ಷಗಳಿಂದ ಮಾಸದೆ ಉಳಿದಿರುವ ಶಿಲ್ಪಿ ಕಲಾ ಸೌಂದರ್ಯ ಎಲ್ಲ ಹೊಯ್ಸಳ ನಿರ್ಮಿತ ದೇವಾಲಗಳಲ್ಲಿ ನೋಡ ಸಿಗುತ್ತದೆ. ಅಂತೆಯೇ ನೀವು ತಿಪಟೂರು ತಾಲ್ಲೂಕಿನ ಅರಳಗುಪ್ಪೆಯ ಚೆನ್ನ ಕೇಶವ ಸ್ವಾಮಿ ದೇಗುಲಕ್ಕೂ, ತುರುವೇಕೆರೆಯ ಚೆನ್ನಿಗರಾಯ ದೇಗುಲಕ್ಕೂ, ಚಿಕ್ಕಮಗಳೂರಿನ ಬೆಳವಾಡಿಯ ವೀರನಾರಾಯಣ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿದರೆ ಬಹಳ ಸಂತೋಷಪದುವಿದೆಂದು ನಂಬಿದ್ದೇನೆ.

ಚೆಲುವಿ ಚೆಲುವಿ

ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ ನೇರಳೆ ಹಣ್ಣು ಬಲು ಕಪ್ಪು ನೇರಳೆ ಹಣ್ಣು ಬಲು ಕಪ್ಪು ಆದರೂ ಸವಿದು ನೋಡಿದರೆ ರುಚಿಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ ಹತ್ತಿಯಾಹಣ್ಣು ಬಲು ಕೆಂಪು ಹತ್ತಿಯಾಹಣ್ಣು ಬಲು ಕೆಂಪು ಆದರೂ ಒಡೆದು ನೋಡಿದರೆ ಹುಳುಬಹಳ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨- ಬಂಗಾರ ಬಲೆ ತೊಟ್ಟು ಬಡವಾರ ಬೈಬೇಡ ಬಂಗಾರ ನಿನಗೆ ಸ್ಥಿರವಲ್ಲ ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾಹ್ನ ಸಂಜೆ ಆಗುವುದೂ ತಡವಿಲ್ಲ ಚೆಲುವಿ ಚೆಲುವಿ ಎಂದು ಅತಿಆಸೆ ಪಡಬೇಡ ಚೆಲುವಿದ್ದರೇನೂ ಗುಣವಿಲ್ಲ -೨-

ಒಂದು ಎರಡು -2

ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಐದು ಆರು ಬೇಳೆಯ ಸಾರು ಏಳು ಎಂಟು ಪಲ್ಯಕೆ ದಂಟು ಒಂಭತ್ತು ಹತ್ತು ಎಲೆಮುದಿರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು

ಒಂದು ಎರಡು -1

ಒಂದು ಎರಡು ಗಂಧದ ಕೊರಡು ಮೂರು ನಾಲ್ಕು ನೀರು ಹಾಕು ಐದು ಆರು ಅರೆವುದು ಜೋರು ಏಳು ಎಂಟು ಪರಿಮಳ ಉಂಟು ಒಂಭತ್ತು ಹತ್ತು ಮೊರೆಗೆ ಮೆತ್ತು

ಮುಂಜಾನೆದ್ದು ಕುಂಬಾರಣ್ಣ

ಮು೦ಜಾನೆದ್ದು ಕು೦ಬಾರಣ್ಣ ಹಾಲು ಬಾನು೦ದಾನ ಹಾರ್ಯಾರಿ ಮಣ್ಣಾ ತುಳಿದಾನ ಹಾರು ಹಾರ್ಯಾರಿ ಮಣ್ಣ ತುಳಿಯೂತ ಮಾಡ್ಯಾನ ನಾರ್ಯೀರು ಹೊರುವಂಥ ಐರಾಣಿ - ಹೊತ್ತಾರೆದ್ದು ಕು೦ಬಾರಣ್ಣ ತುಪ್ಪ ಬಾನು೦ಡಾನ ಗಟ್ಟೀಸಿ ಮಣ್ಣಾ ತುಳಿದಾನ ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ ಮಿತ್ರೇರು ಹೊರುವ೦ತೆ ಐರಾಣಿ ಅಕ್ಕಿಲಿಟ್ಟು ನಾವು ತಕ್ಕೊ೦ಡು ತ೦ದೀವಿ ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಗಿ೦ಡೀಲಿ ತ೦ದೀವ್ನಿ ತಿಳಿದುಪ್ಪ ಕು೦ಬಾರಣ್ಣ ತ೦ದೀಡು ನಮ್ಮ ಐರಾಣಿ ಕು೦ಬಾರಣ್ಣ ಮಡದಿ ಕಡಗಾದ ಕೈಯಿಕ್ಕಿ ಕೊಡದಾ ಮ್ಯಾಲೇನ ಬರೆದಾಳ ಕೊಡದಾ ಮ್ಯಾಲೇನ ಬರೆದಾಳ ಕಲ್ಯಾಣದ ಶರಣಾ ಬಸವನ ನಿಲಿಸ್ಯಾಳ